2,645 total views
ಉದಯೋನ್ಮುಖ ಪ್ರತಿಭೆಗಳ ಪರಿಚಯ ಮಾಲಿಕೆ
ವೃತ್ತಿಯಲ್ಲಿ ಶಿಕ್ಷಕಿ, ಪ್ರವೃತ್ತಿಯಲ್ಲಿ ಲೇಖಕಿ, ಸಾಮಾಜಿಕ ಹೋರಾಟಗಾತಿ೯.
ಒಂದು ಕಾಲದಲ್ಲಿ ಮಹಿಳೆಯರು ನಾಲ್ಕು ಗೋಡೆಗಳಿಗೆ ಸೀಮಿತವಾಗಿ ಮಕ್ಕಳನ್ನು ಹೆರುವ ಯಂತ್ರಗಳಾಗಿದ್ದರು. ಯಾವುದೇ ಶಿಕ್ಷಣವಿಲ್ಲದೆ, ನಿತ್ಯ ಸಾಮಾಜಿಕ ಶೋಷಣೆಗಳಿಗೆ, ಮೂಢನಂಬಿಕೆಗಳಿಗೆ ಬಲಿಯಾಗುತ್ತಾ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆ ನಲುಗಿ ಹೋಗಿದ್ದಳು. ಸ್ವಾತಂತ್ರ್ಯ ಭಾರತದಲ್ಲಿ ಸಂವಿಧಾನ ಕೊಟ್ಟ
ವಿಶೇಷವಾದ ಹಕ್ಕುಗಳನ್ನು ಸದುಪಯೋಗ ಪಡಿಸಿಕೊಂಡ ಬಹುತೇಕ ಮಹಿಳೆಯರು ಅಧಿಕಾರದ, ಆಡಳಿತದ ಚುಕ್ಕಾಣಿ ಹಿಡಿದರು. ಅಧುನಿಕ ಭಾರತದಲ್ಲಿ ಮಹಿಳೆಯರು ಕೂಡ ಸಕಾ೯ರಿ ನೌಕರಿಗೆ, ತನ್ನ ಉದ್ಯೋಗಕ್ಕೆ ತನ್ನನ್ನು ತಾನು ಸೀಮಿತಗೊಳಸಿಕೊಳ್ಳದೆ. ಸಾಹಿತ್ಯ, ಕಲೆ, ಸಂಗೀತಾ, ಕುಸ್ತಿ ವಿವಿಧ ರೀತಿಯ ಹೋರಾಟದಲ್ಲಿ, ಕ್ರೀಡಾ ಕ್ಷೇತ್ರದಲ್ಲೂ ಕೂಡ ತರಬೇತಿಯನ್ನು ಪಡೆದು ಎಲ್ಲಾ ರಂಗಗಳಲ್ಲೂ ಪುರುಷನಿಗೆ ಸಮಾನವಾಗಿ ಬೆಳೆದು ನಿಂತಳು. ಇತ್ತೀಚಿನ ದಿನಗಳಲ್ಲೂ ಕೂಡ, ಬಹಳಷ್ಟು ಮಹಿಳೆಯರು ಸಾಹಿತ್ಯ ಕ್ಷೇತ್ರದಲ್ಲಿ, ರಂಗಭೂಮಿಯ ಕ್ಷೇತ್ರದಲ್ಲಿ, ನಟನೆಯಲ್ಲಿ, ಸಾಮಾಜಿಕ ಹೋರಾಟಗಳಲ್ಲೂ ತಮ್ಮನ್ನು ತೊಡಗಿಸಿಕೊಂಡು ನೊಂದವರ ಪರವಾಗಿ, ಮಹಿಳೆಯರ ಪರವಾಗಿ, ದಲಿತರ ಪರವಾಗಿ ಹೋರಾಡುತ್ತಾ ಅವರ ಹಕ್ಕುಗಳನ್ನು ಅವರಿಗೆ ತಲುಪಿಸಲು ಪ್ರಯತ್ನ ಪಡುತ್ತಿದ್ದಾರೆ.
ಇಂತವರ ಮಧ್ಯ ಇತ್ತೀಚಿನ ದಿನಗಳಲ್ಲಿ ಪ್ರವಧ೯ಮಾನಕ್ಕೆ ಬರುತ್ತಿರುವ ಸಾಮಾಜಿಕ ಹೋರಾಟಗಾತಿ೯ಯೇ ಪ್ರತಿಮಾ ಹಾಸನ್. ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ್ ರವರು ಮೂಲತಃ ಹಾಸನದವರು. ಹಾಸನದ ಶ್ರೀ ಸುರೇಶ್ ಮತ್ತು ಶ್ರೀಮತಿ ನೀಲಮ್ಮ ಎಂಬ ದಂಪತಿಗಳ ಹಿರಿಯ ಪುತ್ರಿಯಾಗಿ ಜನಿಸಿದರು. ಇವರು ನ್ಯಾಷನಲ್ ಪ್ರಾಥಮಿಕ ಶಾಲೆ ಹಾಸನ ಇಲ್ಲಿ ಪ್ರಾಥಮಿಕ ಮಾಧ್ಯಮಿಕ ವಿದ್ಯಾಭ್ಯಾಸ ಮುಗಿಸಿ, ಸರ್ಕಾರಿ ಪ್ರೌಢಶಾಲೆ ಹಾಸನದಲ್ಲಿ ಪ್ರೌಢ ಶಿಕ್ಷಣವನ್ನು ಮುಗಿಸಿದರು. ನಂತರ ವಿದ್ಯಾಭ್ಯಾಸ ಮುಂದುವರಿಸಿದ ಇವರು ಸರ್ಕಾರಿ ಕಲಾ ಕಾಲೇಜು ಹಾಸನ ಇಲ್ಲಿ ಪದವಿಪೂರ್ವ ಶಿಕ್ಷಣ ಮುಗಿಸಿ,ಇದೇ ಕಾಲೇಜಿನಲ್ಲಿ ಪದವಿಯನ್ನು ಪಡೆದರು. ನಂತರದಲ್ಲಿ ಶಿಕ್ಷಕರ ತರಬೇತಿಯನ್ನು (B Ed) ಶ್ರೀ ರಂಗ ಬಿ ಎಡ್.ಕಾಲೇಜು ಹಾಸನ ಪೂರೈಸಿದರು. ಉನ್ನತ ವ್ಯಾಸಂಗವನ್ನು ಮಾಡಲು ನಿಧ೯ರಿಸಿ, ಸ್ನಾತಕೋತ್ತರ ಪದವಿಯನ್ನು ಮಾನಸಗಂಗೋತ್ರಿ ಕಾಲೇಜು, ಮೈಸೂರು ಇಲ್ಲಿ ಮುಗಿಸಿದರು. ಶ್ರೀಮತಿ ಪ್ರತಿಮಾ ಹಾಸನ್ ರವರು ತಮ್ಮ ಶಿಕ್ಷಕಿ ವೃತ್ತಿಯನ್ನು ತಾನು ಶಿಕ್ಷಕರ ತರಭೇತಿಯನ್ನು ಪಡೆದ ಕಾಲೇಜಿನ ಆಡಳಿತ ಮಂಡಲಿಯ ಶಾಲೆಯಾದಂತಹ ಶ್ರೀರಂಗ ಕಿಡ್ಸ್ ವರ್ಡ್ ಶಾಲೆ( ಬ್ರಿಲಿಯಂಟ್ ಪಬ್ಲಿಕ್ ಸ್ಕೂಲ್ ) ಇಲ್ಲಿ ತಮ್ಮ ವೃತಿಯ ಪಯಣವನ್ನು ಆರಂಭಿಸಿದ ಇವರು ನಂತರದಲ್ಲಿ ಹಾಸನದ ಬಸವೇಶ್ವರ ಪ್ರೌಢಶಾಲೆ, ಗೋಲ್ಡನ್ ಪಬ್ಲಿಕ್ ಸ್ಕೂಲ್, ರ್ಯಾಂಬೋ ಕಿಡ್ಸ್ ವರ್ಡ್, ಇಲ್ಲಿ ಹಲವು ವರುಷಗಳು ಕಾರ್ಯವನ್ನು ನಿವ೯ಹಿಸಿ, ಸಾಂಸಾರಿಕ ಜೀವನವನ್ನು ಆರಂಭಿಸಿದ ಶ್ರೀಮತಿ ಪ್ರತಿಮಾ ಹಾಸನ್ ರವರು ತನ್ನ ಪತಿಯ ಜೊತೆಯಲ್ಲಿ ಹೊರರಾಜ್ಯದಲ್ಲಿ ನೆಲೆಸಿದರು, ಉದ್ಯೋಗ ಮತ್ತು ಸಮಾಜಸೇವೆಯನ್ನು ಆರಂಭಿಸಿದ ಇವರು ಮಹಾರಾಷ್ಟ್ರದ ” ಸರಸ್ವತಿ ವಿದ್ಯಾಲಯಂ ಶಾಲೆಯಲ್ಲಿ ” ಎರಡು ವರ್ಷ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡಿದರು. ನಂತರ ಹಿಮತ್ ಸಿಂಗ್ ಕಾ ಕಾರ್ಖಾನೆಯಲ್ಲಿ ಸೂಪರ್ವೈಸರ್ ಆಗಿ ಉದ್ಯೋಗವನ್ನು ಮಾಡಿದರು. ಮತ್ತೆ ಹೊರ ರಾಜ್ಯದಿಂದ ತಾಯ್ನೆಲಕ್ಕೆ ಮರಳಿದ ಶ್ರೀಮತಿ ಪ್ರತಿಮಾ ಹಾಸನ್ ರವರು ಬುದ್ಧಿಮಾಂದ್ಯ, ಕಿವುಡ ಆಂಧ ಮಕ್ಕಳ ಶಾಲೆ. ಮೈಸೂರು ಇಲ್ಲಿ ಮತ್ತೆ ತಮ್ಮ ವೃತ್ತಿ ಜೀವನವನ್ನು ಆರಂಭಿಸುತ್ತಾರೆ. ಹಲವಾರು ಸರ್ಕಾರಿ ಶಾಲೆಗಳಲ್ಲಿ ಕಂಪ್ಯೂಟರ್ ತರಬೇತಿಗಾರ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಶಾಸ್ತ ಪಬ್ಲಿಕ್ ಸ್ಕೂಲ್ ನಲ್ಲಿ ಪ್ರೌಢಶಾಲಾ ಶಿಕ್ಷಕಿಯಾಗಿ ಎರಡು ವರ್ಷ ಕಾರ್ಯ ನಿರ್ವಹಿಸಿ, ಪ್ರಸ್ತುತ ಸರ್ಕಾರಿ ಶಾಲೆಯಲ್ಲಿ ಅರೆಕಾಲಿಕ ಕಂಪ್ಯೂಟರ್ ಟೀಚರ್ ಆಗಿ ಕೆಲಸವನ್ನು ನಿವ೯ಹಿಸುತ್ತಿದ್ದಾರೆ. ಶ್ರೀಮತಿ ಪ್ರತಿಮಾ ಹಾಸನ್ ರವರು ನೇರ ನುಡಿಯ ಮಾತುಗಾರ್ತಿಯಾಗಿದ್ದು ಧೈರ್ಯವಂತೆ ಕೂಡ. ಸಾಹಿತಿ, ಶಿಕ್ಷಕಿ, ಸಮಾಜ ಸೇವಕಿಯಾಗಿ ಹೋರಾಟಗಾತಿ೯ಯಾಗಿ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮದೆ ಆದಂತಹ ರೀತಿಯಲ್ಲಿ ಸೇವೆ ಸಲ್ಲಿಸುತ್ತಾ. ಸಾಮಾಜಿಕ ಕಳಕಳಿಯನ್ನು ತೋರುತ್ತಿದ್ದಾರೆ. ಹ್ಯೂಮನ್ ರೈಟ್ಸ್ ಸಂಘಟನೆಯಲ್ಲಿ ಹಾಸನದ ಜಿಲ್ಲಾಧ್ಯಕ್ಷೆಯಾಗಿ, ನೊಂದು ಬಂದಂತಹ ಮಹಿಳೆಯರಿಗೆ ತನ್ನಿಂದ ಆಗುವಂತಹ ಸೇವೆಯನ್ನು ನಿಷ್ಕಲ್ಮಶವಾಗಿ ಸಲ್ಲಿಸುತ್ತಾ, ನೊಂದ ಮಹಿಳೆಯರ ಪರವಾಗಿ ಹೋರಾಟವನ್ನು ಆರಂಭಿಸಿದ್ದಾರೆ. ಕರ್ನಾಟಕ ರಾಜ್ಯ ಮುಕ್ತಕ ಸಾಹಿತ್ಯ ಪರಿಷತ್ತಿನ ಹಾಸನದ ಜಿಲ್ಲಾಧ್ಯಕ್ಷೆಯಾಗಿ, ರಾಜ್ಯ ಒಕ್ಕಲಿಗರ ಸಂಘಟನೆಯ ಹಾಸನ ಜಿಲ್ಲಾ ಕಾರ್ಯದರ್ಶಿಯಾಗಿ,, ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ, ಕನ್ನಡ ರಕ್ಷಣಾ ವೇದಿಕೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ, ಸ್ಟೇಟ್ ಹ್ಯೂಮನ್ ರೈಟ್ಸ್ ನಲ್ಲಿ ಹಾಸನದ ಅಧ್ಯಕ್ಷರಾಗಿ, ರಾಜ್ಯ ಪ್ರೆಸ್ ಕ್ಲಬಿನ ಹಾಸನದ ಅಧ್ಯಕ್ಷರಾಗಿ, ಕನಸಿನ ಭಾರತ ಪತ್ರಿಕೆಯ ಹಾಸನ ಜಿಲ್ಲಾ ವರದಿಗಾರ್ತಿಯಾಗಿ ಕಾರ್ಯವನ್ನು ನಿವ೯ಹಿಸುತ್ತಿದ್ದು ರೈತರ ಪರವಾಗಿ. ಧ್ವನಿಯಿಲ್ಲದವರ ಪರವಾಗಿ ಧ್ವನಿಯೆತ್ತಿ ಹೋರಾಡುತ್ತಾ ಅವರಿಗೆ ನ್ಯಾಯ ಕೊಡಿಸಿ ಹೋರಾಟಗಾತಿ೯ಯಾಗಿ ಹಾಸನ ಜಿಲ್ಲೆಯಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಬರೀ ಹೋರಾಟ ಕ್ಷೇತ್ರದಲ್ಲಿ, ಸಾಮಾಜಿಕ ಕ್ಷೇತ್ರದಲ್ಲಿ ಮಾತ್ರವಲ್ಲದೆ ಸಾಹಿತ್ಯ ಕ್ಷೇತ್ರದಲ್ಲೂ ತಮ್ಮ ಛಾಪನ್ನು ಮೂಡಿಸಿರುವ ಇವರು. ಕನ್ನಡದಲ್ಲಿ ಮುಕ್ತಕಗಳನ್ನು ರಚಿಸುವ ಕಾಯಕದಲ್ಲೂ ತೊಡಗಿದ್ದಾರೆ. ಮುಕ್ತಕ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸಾಧನೆಯನ್ನು ಮಾಡುವ ಮಹಾದಾಸೆ ಹೊಂದಿದ್ದು, ಹಿಂದಿ ಮತ್ತು ಕನ್ನಡ ಎರಡು ಭಾಷೆಯಲ್ಲೂ ಕವನಗಳನ್ನು ಬರೆಯುತ್ತಿದ್ದಾರೆ. ಇವರ ಕವನಗಳು. ಚುಟುಕುಗಳು. ಲೇಖನಗಳು. ಮುಕ್ತಕಗಳು. ಗಜಲ್, ಕಥೆ, ಟಂಕಾ, ರುಬಾಯಿ ಮುಂತಾದ ಕಾವ್ಯ ಪ್ರಕಾರಗಳು ಹಲವಾರು ಪತ್ರಿಕೆಗಳಲ್ಲಿ, ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದು. ಇವರ ಸಂದಶ೯ಗಳನ್ನು ಹಲವು ಪತ್ರಿಕೆ ಮತ್ತು ದೂರದರ್ಶನದವರು ಪಡೆದಿರುತ್ತಾರೆ. ಇವರು ಹಲವಾರು ವರ್ಷದಿಂದಲೂ ಸಾಮಾಜಿಕ ಕಾರ್ಯಕರ್ತೆಯಾಗಿದ್ದು. ಮಹಿಳಾ ಹೋರಾಟಗಾರ್ತಿಯಾಗಿ,ಗಾಯಕಿಯಾಗಿ,ಪತ್ರಕರ್ತೆಯಾಗಿ, ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದನ್ನು ಗಮನಿಸಿದ ಸಂಘಸಂಸ್ಥೆಗಳು ರಾಜ್ಯಮಟ್ಟದಲ್ಲಿ, ರಾಷ್ಟ್ರ ಮಟ್ಟದಲ್ಲಿ ಇವರು ಗುರುತರ ಸೇವೆಯನ್ನು ಗಮನಿಸಿ ಉತ್ತಮ ಶಿಕ್ಷಕಿ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.ವಿಜಯಪುರದ ಸುಜ್ಞಾನ ವಿದ್ಯಾಪೀಠ ಮತ್ತು ಸಾಂಸ್ಕೃತಿಕ ರಂಗ ಕಲಾವಿದರ ಸಾಧಕರ ಶ್ರೀ ಮಾತಾ ಪ್ರಕಾಶನದಿಂದ ” ಕವಿ ವಿಭೂಷಣ ” ಮತ್ತು “ಸಮಾಜ ಸೇವಾ ರತ್ನ “ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದಾರೆ.
ಕಥಾ ಬಿಂದು ಪ್ರಕಾಶನದಿಂದ ” ಸೌರಭ ರತ್ನ ರಾಜ್ಯ ಪ್ರಶಸ್ತಿ”ಯನ್ನು, ಹೈಬ್ರಿಡ್ ನ್ಯೂಸ್ ಕೊಪ್ಪಳ ಇವರಿಂದ “ಮಹಿಳಾ ಸಾಧಕಿ ಮತ್ತು ಹೆಮ್ಮೆ ಕನ್ನಡತಿಯ ಪ್ರಶಸ್ತಿಯನ್ನು ಪಡೆದು ” ಶಿಕ್ಷಣ ಶಿಲ್ಪಿ ಎಂಬ ಪ್ರಶಸ್ತಿಯನ್ನು ಛತ್ತೀಸ್ಗಡದಲ್ಲಿ ಪಡೆದಿದ್ದಾರೆ. ಮಧ್ಯಪ್ರದೇಶದಲ್ಲೂ ಸಹ ಇವರು ಪ್ರಶಸ್ತಿಯನ್ನು ಪಡೆದಿರುತ್ತಾರೆ. ಸ್ವರ್ಣಭೂಮಿ ಫೌಂಡೇಶನ್ ಕರ್ನಾಟಕ ಮತ್ತು ಕರ್ನಾಟಕ ರಾಜ್ಯ ಶಿಕ್ಷಕರ ಸಾಹಿತ್ಯ ಪರಿಷತ್ತು ಇವರಿಂದ “ಮಹಿಳಾ ಚೈತನ್ಯ ರತ್ನ” ಪ್ರಶಸ್ತಿ ಪಡೆದಿರುತ್ತಾರೆ. “ರಾಷ್ಟ್ರೀಯ ಗೌರವ ಶಿಕ್ಷಕ್ ಸಮ್ಮಾನ್”. “ರಾಷ್ಟ್ರೀಯ ಸಾಧಕ ರತ್ನ ಪ್ರಶಸ್ತಿ “ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಹಿಮಾಲಯ ಪ್ರತಿಷ್ಠಾನ. ಮೈಸೂರು ಇವರಿಂದ ” ಪಂಚಮುಕ್ತಕ ಮಾಲೆ ಪ್ರಶಸ್ತಿ ” ಹೀಗೆ ಹಲವಾರು ಪ್ರಶಸ್ತಿಗಳ ಸರಮಾಲೆಯ ಪಟ್ಟಿಯೆ ಇದೆ ಇವರದು..ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಬೇಕೆಂಬ ಮಹದಾಸೆಯನ್ನು ಹೊತ್ತಿರುವ ಇವರು. ಪುಸ್ತಕಗಳೇ, ಬರಹವೇ ನನ್ನ ನೆಚ್ಚಿನ ಸ್ನೇಹಿತ ಮತ್ತು ಸಂಗಾತಿ ಎಂದು ಹೇಳುತ್ತಾ, ತನ್ನ ಅಮ್ಮನ ಮತ್ತು ಅಣ್ಣನ ಪ್ರೋತ್ಸಾಹವೇ ನನ್ನ ಬೆಳವಣಿಗೆ ಕಾರಣವಾಯಿತು ಎನ್ನುತ್ತಾರೆ. ರಾಷ್ಟ್ರ ಮಟ್ಟ ಕವಿಗೋಷ್ಠಿಯಲ್ಲಿ ಹಿಂದಿ ಭಾಷೆಯಲ್ಲಿ ಕವನ ವಾಚನ ಮಾಡಿ ಎಲ್ಲರಿಂದ ಪ್ರಶಂಸೆಗೆ ಒಳಗಾಗಿದ್ದಾರೆ. ರಾಜ್ಯಮಟ್ಟದ ಬಹಳಷ್ಟು ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿಯೂ ಕೂಡ ಕಾರ್ಯಕ್ರಮದ ನಿವ೯ಹಣೆ ಮಾಡುತ್ತಾ ಹಲವಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿ, ಪ್ರಶಂಸೆಯನ್ನು ಪಡೆದಿರುತ್ತಾರೆ. ಸದಾ ಕ್ರಿಯಾಶೀಲರಾಗಿರುವ ಶ್ರೀಮತಿ ಪ್ರತಿಮಾ ಹಾಸನ್ ಬಹುಮುಖ ಪ್ರತಿಭೆ. ಇವರು ಇತ್ತೀಚೆಗೆ ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಎಂಬ ಸಂಸ್ಥೆಯನ್ನು ಸ್ಥಾಪಿಸಿಕೊಂಡು ಕನ್ನಡ ಪರವಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹೊಸ ಹೊಸ ಪ್ರತಿಭೆಗಳನ್ನು ಗುರುತಿಸಿ ವೇದಿಕೆಯನ್ನು ನೀಡಿ ಗೌರವಿಸುತ್ತಾ ಕನ್ನಡದ ಸೇವೆಯಲ್ಲಿ ನಿರತರಾಗಿದ್ದಾರೆ. ಇವರು ಹೀಗೆಯೇ ಸಾಮಾಜಿಕ ಕಾರ್ಯಕರ್ತೆಯಾಗಿ, ಸಾಹಿತ್ಯ, ಕೃಷಿ. ಸಾಂಸ್ಕೃತಿಕ ಕ್ಷೇತ್ರ. ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಾಹಿತ್ಯ ಕ್ಷೇತ್ರದಲ್ಲೂ ಗುರುತಿಸಿಕೊಂಡು ಇವರ ಸೇವೆ ಮುಂದುವರಿಯಲಿ ಎಂದು ಪತ್ರಿಕೆಯ ಪರವಾಗಿ ವೈಯಕ್ತಿಕವಾಗಿ ಹಾರೈಸುತ್ತೇನೆ.
ನಾರಾಯಣಸ್ವಾಮಿ .ವಿ
ವಕೀಲರು ಮತ್ತು ಲೇಖಕರು
ಮಾಸ್ತಿ ಕೋಲಾರ ಜಿಲ್ಲೆ…