2,888 total views
ಕಲಬುರಗಿ:- ಚಿತ್ತಾಪೂರ ತಾಲೂಕಿನ ಸುಗೂರ ಎನ್ ಗ್ರಾಮದ ಶ್ರೀ ಭೋಜಲಿಂಗೇಶ್ವರ ವಿಧ್ಯಾವರ್ಧಕ ಶಿಕ್ಷಣ ಸಂಸ್ಥೆಯ ಶಾಲಾ ಮಕ್ಕಳು ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಜಿಲ್ಲಾ ಮಟ್ಟದಿಂದ. ರಾಜ್ಯ ಮಟ್ಟಕ್ಕೆ ಆಯ್ಕೆ ಯಾದರು, ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಸುಗೂರ ಎನ್ ಗ್ರಾಮದ. ಶ್ರೀ ಭೋಜಲಿಂಗೇಶ್ವರ ವಿಧ್ಯಾವರ್ಧಕ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಕುಮಾರ- ಜಗಲಿಂಗ ತಂ. ಸಾಬ್ಬಣ್ಣ ಈತನು ೪.೭೮ ಮೀಟರ್ ಉದ್ದ ಜಿಗಿತ್ ಪ್ರಥಮ ಸ್ಥಾನ. ಹಾಗೂ 200. ಮೀಟರ್ ಓಟದಲ್ಲಿ ಸಹ ದ್ವೀತಿಯ ಸ್ಥಾನ. ಹಾಗೂ ವಾಲಿಬಾಲ್ ತಂಡವು ಕ್ರೀಡಾಕೂಟದಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಕಲಬುರಗಿಯ ಚಂದ್ರಶೇಖರ ಪಾಟೀಲ ಕ್ರೀಡಾಂಗಣ. ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಉದ್ದ. ಜಿಗಿತ್ ದಲ್ಲಿ ಪ್ರಥಮ ಸ್ಥಾನ ಪಡೆದು, 200ಮೀ. ಓಟದಲ್ಲಿ ದ್ವೀತಿಯ ಸ್ಥಾನ ಪಡೆಯಿತು. ಹಾಗೆಯೇ ಬಾಲಕರ ವಾಲಿಬಾಲ್ ನಲ್ಲಿ ದ್ವೀತಿಯ ಸ್ಥಾನ ಪಡೆದುಕೊಂಡು ಶ್ರೀ ಭೋಜಲಿಂಗೇಶ್ವರ ವಿಧ್ಯಾವರ್ಧಕ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ. ಈ ಎಲ್ಲಾ ಕ್ರೀಡಾಪಟುಗಳಿಗೆ ಶ್ರೀಮಠದ ಭೋಜಲಿಂಗೇಶ್ವರ ಮಠದ ಪೀಠಾಧಿಪತಿಗಳು ಹಾಗೂ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಪರಮ ಪೂಜ್ಯ ಶ್ರೀ ಹಿರಗಪ್ಪ ತಾತನವರು ಹಾಗೂ ಕಿರಿಯ ಪೀಠಾಧಿಪತಿಗಳಾದ ಡಾ.ಕುಮಾರ ಶ್ರೀ ಭೋಜರಾಜ ಪೂಜ್ಯ ಶ್ರೀಗಳು ಅವರು ಹರ್ಷ ವ್ಯಕ್ತಪಡಿಸಿದರು. ಹಾಗೂ ಅವರು ಕ್ರೀಡಾಪಟುಗಳಿಗೆ ಅಭಿನಂದಿಸಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಮುಖ್ಯ ಗುರುಗಳಾದ -ಶರಣ ಬಸಪ್ಪ ದೋಣಗಾಂವ್, ಅವರು ಮಕ್ಕಳನ್ನುದ್ದೇಶಿಸಿ ಶಾಲೆಯ ಕೀರ್ತಿ ಪತಾಕೆಯನ್ನು ರಾಷ್ಟ್ರ ಮಟ್ಟದವರೆಗೆ ಕೊಂಡೊಯ್ಯಿರಿ ಎಂದು ಅಭಿನಂದಿಸಿ ಹರಸಿದರು. ಮಕ್ಕಳ ಈ ಸಾಧನೆಗೆ ಶಾಲೆಯ ಎಲ್ಲ ಶಿಕ್ಷಕರು ಹರ್ಷ ವ್ಯಕ್ತಪಡಿಸಿದರು. ದೈಹಿಕ ಶಿಕ್ಷಕರು ಕಾಳಿದಾಸ್ ಸರ. ನಾಗೇಶ ಸಹ ಶಿಕ್ಷಕರು..ಬಸವರಾಜ ಶಿಕ್ಷಕರು. ಸಿಂಧೂ ಮೇಡಂ ಸುಗೂರ ಎನ್, ಮಲ್ಲಿಕಾರ್ಜುನ ಸರ ಕೋಚ್ ನೀಡಿದರು. ಈ ಸಂಧರ್ಭದಲ್ಲಿ ವೀರೇಶ ಶಾಸ್ತ್ರೀಗಳು. ಸಿದ್ದುಗೌಡ ಕುರಾಳ ಸುಗೂರ ಎನ್, ಸಾಬ್ಬಣ್ಣ ಮಲ್ಕಪನಹಳ್ಳಿ, ಮಲ್ಲಿಕಾರ್ಜುನ ಬಿ.ಹಡಪದ ಸುಗೂರ ಎನ್, ರಾಜು ಚಿಗರಳ್ಳಿ , ಚಾಂಧ್ ಪಾಶಾ ಬಂಟ್ನಳ್ಳಿ, ಸೇರಿದಂತೆ ವಿಧ್ಯಾರ್ಥಿಗಳಿಗೆ ಪ್ರೋತ್ಸಾಹಿಸಿದರು.
ವರದಿಗಾರರು -ಡಾ.ಮಲ್ಲಿಕಾರ್ಜುನ ಬಿ.ಹಡಪದ ಸುಗೂರ ಎನ್