2,563 total views
ಕುಮಟಾ :ಕ್ರೀಡೆಯು ದೇಹ ಮತ್ತು ಮನಸ್ಸಿನ ಸಮತೋಲನವನ್ನು ಕಾಪಾಡಲು ಪೂರಕವಾಗಿದೆ. ಕ್ರೀಡೆಯಿಂದ ಶಿಸ್ತು ಮತ್ತು ನಾಯಕತ್ವ ಗುಣ ಹೆಚ್ಚು ಜವಾಬ್ದಾರಿಯಿಂದ ಕೆಲಸ ಮಾಡಲು ಪ್ರೇರೆಪಿಸುತ್ತದೆ. ಎಂದು ಮಹಾತ್ಮಾಗಾಂಧಿ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶ್ರೀ ಹೊನ್ನಪ್ಪ ಎನ್ ನಾಯಕ ನುಡಿದರು. ಅವರು ಸೆಕೆಂಡರಿ ಹೈಸ್ಕೂಲ್ ಕ್ರೀಡಾಂಗಣದಲ್ಲಿ ನಡೆದ ೨೦೨೩-೨೪ ರ ಜಿಲ್ಲಾಮಟ್ಟದ ಪ್ರೌಢ ಶಾಲೆಗಳ ಇಲಾಖಾ ಕ್ರೀಡಾಕೂಟವನ್ನು ಉದ್ಘಾಟಸಿ ಮಾತನಾಡಿದರು. “ಸದೃಢ ದೇಹದಲ್ಲಿ ಸದೃಢ ಮನಸನ್ನೂ ಹುಟ್ಟು ಹಾಕುವುದೇ ಶಿಕ್ಷಣ ಹಿರೇಗುತ್ತಿ ಹೈಸ್ಕೂಲ್ ನವರು ಅತೀ ಅಚ್ಚುಕಟ್ಟಾಗಿ ಕ್ರೀಡಾಕೂಟ ಸಂಘಟಿಸಿದ್ದಾರೆ ಕ್ರೀಡಾಕೂಟ ಯಶಶ್ವಿಯಾಗಲಿ, ಎಂದು ಶುಭಕೋರಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರೇಗುತ್ತಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀ ಶಾಂತಾ ಎನ್ ನಾಯಕ ಕ್ರೀಡಾಜ್ಯೋತಿ ಬೆಳಗಿಸಿ ಮಾತಾನಾಡಿದರು. ದೈಹಿಕ ಚಟುವಟಿಕೆಗಳಿಂದಾಗಿ ದೈಹಿಕ ಸದೃಢತೆ ದೊರಕುವುದಲ್ಲದೆ ಬುದ್ದಿಯೂ ವಿಕಾಸಗೋಳ್ಳು ವುದು ಅದಕ್ಕಾಗಿ ಕ್ರೀಡಾಕೂಟ ನಡೆಸಲು ಯೋಜಕರು ಅತ್ತಿ ಮುಖ್ಯ ಯೋಜಕರಿಂದ ಯಶಸ್ವಿಯಾಗುತ್ತದೆ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಕುಮಟಾ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಆರ್ ಎಲ್ ಭಟ್ಟ ಮಾತನಾಡಿ “ಜೀವನದುದ್ದಕ್ಕೂ ಆರೋಗ್ಯಕರ ದೈಹಿಕ ಚಟುವಟಿಕೆಗಳನ್ನು ಅನುಭವಿಸಲು ಅಗತ್ಯ ಜ್ಞಾನ ಕೌಶಲ್ಯ ಹಾಗೂ ದೈಹಿಕವಾಗಿ ಸುರಕ್ಷಿತ ವ್ಯಕ್ತಿಗಳನ್ನು ರೂಪಿಸಲು ಶಾಲೆಯಲ್ಲಿ ನಡೆಯುವ ಇಲಾಖಾ ಕ್ರೀಡಾಕೂಟಗಳು ಸಹಾಯಕವಾಗಿದೆ ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಜಿಲ್ಲಾ ದೈಹಿಕಶಿಕ್ಷಣ ಶಿಕ್ಷಣಾಧಿಕಾರಿಗಳಾದ ಶ್ರೀ ಶಿವಾನಂದ ನಾಯಕ,”ವಿದ್ಯಾರ್ಥಿಗಳು ಕ್ರೀಡೆಯಲ್ಲಿ ತೊಡಗುವುದರಿಂದ ಸರ್ವತೋಮುಖ ಅಭಿವೃದ್ಧಿ ಸಾಧಿಸಲು ಕ್ರೀಡೆ ಸಹಕಾರಿಯಾಗಿದೆ ಎಂದರು. ದೈಹಿಕ ಶಿಕ್ಷಕ ನಾಗರಾಜ್ ನಾಯಕ ಕಾರ್ಯಕ್ರಮ ಸಂಘಟಿಸಿ ಕ್ರೀಡಾಪಟುಗಳಿಗೆ ಪ್ರತಿಜ್ಞಾ ವಿಧಿ ನೀಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಹಿರೇಗುತ್ತಿ ವಲಯ ಅರಣ್ಯ ಧಿಕಾರಿ ಪ್ರವೀಣ್ ನಾಯಕ, ಆಡಳಿತ ಮಂಡಳಿಯ ಕಾರ್ಯದರ್ಶಿ ಮೋಹನ್ ಬಿ ಕೆರೆಮನೆ, ಸದಸ್ಯ ಎನ್ ಟಿ ನಾಯಕ, ರಾಮಾನಂದ ಪಟಗಾರ ಹಾಗೂ ಹಿರೇಗುತ್ತಿ ಕಾಲೇಜ ಪ್ರಿನ್ಸಿಪಾಲ ನಾಗರಾಜ್ ಗಾಂವಕರ್, ಉದ್ದoಡ ಗಾಂವಕರ್,ಉಮೇಶ್ ಗಾಂವಕರ್,ಸಣ್ಣಪ್ಪ ನಾಯಕ,ಕಾರವಾರ ದೈಹಿಕ ಪರಿವಿಕ್ಷಕ್ ಪ್ರಕಾಶ್ ನಾಯಕ ಉಪಸ್ಥಿತರಿದ್ದರು.ಕಾರ್ಯಕ್ರಮ ಚೈತನ್ಯ ಸಂಗಡಿಗರ ಪ್ರಾಥನೆಯೊಂದಿಗೆ ಆರಂಭವಾಯಿತು. ಹಿರೇಗುತ್ತಿ ಹೈಸ್ಕೂಲ್ ಮುಖ್ಯಾಧ್ಯಾಪಕ ಶ್ರೀ ರೋಹಿದಾಸ್ ಎಸ್ ಗಾಂವಕರ ಸರ್ವರನ್ನು ಸ್ವಾಗತಿಸಿದರು ವಿದ್ಯಾರ್ಥಿ ಶಿವಪ್ರಸಾದ್ ನಾಯಕ ಕಾರ್ಯಕ್ರಮ ನಿರೂಪಣೆ ಮಾಡಿದರು. ಕುಮಟಾ ತಾಲೂಕಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಬಿ. ಜಿ ನಾಯಕ ಸರ್ವರನ್ನು ವಂದಿಸಿದರು.ಬಾಲಕರ ವಾಲಿಬಾಲ್ ಆಟದಲ್ಲಿ ಪ್ರಥಮ ಕುಮಟಾ ತಾಲೂಕಿನ ಜನತಾ ವಿದ್ಯಾಲಯ ಬಾಡ. ರನ್ನರ್ ಆಫ್ ಜನತಾ ವಿದ್ಯಾಲಯ ಕಡತೋಕಾ ಹೊನ್ನಾವರ ಬಾಲಕಿಯರ ವಾಲಿಬಾಲ್ ಆಟದಲ್ಲಿ ಪ್ರಥಮ ಹೊನ್ನಾವರ ತಾಲೂಕಿನ ಆರೋಗ್ಯಮಾತಾ ಹೈಸ್ಕೂಲ್ ಗುಂಡಬಾಳ, ರನ್ನರ್ ಆಫ್ ಯೂನಿಯನ್ ಹೈಸ್ಕೂಲ್. ಮಾಜಾಳಿ ಕಾರವಾರ ಜಯಶಾಲಿಯಾ ಗಿದ್ದಾರೆ. ನಿರ್ಣಯಕರಾಗಿ ತಿಮ್ಮಪ್ಪ ನಾಯ್ಕ್ ಚೆಂಡಿಯಾ, ಎಮ್,ಎಸ್,ದೊಡ್ಮನಿ ಹೆಗಡೆ, ವಿನೋದ್ ನಾಯಕ, ದಯಾನಂದ ಗೌಡ, ಕೆ,ಎಸ್, ನಾರಾಯಣ, ಸ್ವಾಮಿ, ಮಹೇಶ್ ಶೆಟ್ಟಿ, ವಿಶಾಲ ನಾಯಕ ಭಾವಿಕೇರಿ ಕಾರ್ಯನಿರ್ವಹಿಸಿದರು ಹಿರೇಗುತ್ತಿ ಎಲ್ಲಾ ಹೈಸ್ಕೂಲ್ ಶಿಕ್ಷಕ ವೃಂದದವರು. ತಾಲೂಕಿನ ದೈಹಿಕ ಶಿಕ್ಷಕರು ಊರ ನಾಗರಿಕರು ಹಾಜರಿದ್ದರು.
ಪ್ರಕಟಣೆ :ವಿಭಾಗ ಮಟ್ಟದ ಪ್ರೌಢಶಾಲೆಗಳ ಬಾಲಕ ಬಾಲ ಕಿಯರ ಇಲಾಖಾ ಕ್ರೀಡಾಕೂಟವನ್ನು ಭಟ್ಕಳ್ ತಾಲೂಕಿನ್ ಶಿರಾಲಿಯ ತಟ್ಟಿಹಕ್ಕಲ್ ಮೈದಾನದಲ್ಲಿ ನಡೆಯಲಿದೆ. ದಿನಾಂಕ ಸೆಪ್ಟೆಂಬರ್ 15-9-2023ಕ್ಕೆ ನೋಂದಣಿ ಹಾಗೂ 16-09-23 ರಂದು ವಿಭಾಗ ಮಟ್ಟದ ವಾಲಿಬಾಲ್ ಆಟ ಮಾತ್ರ ನಡೆಯಲಿದೆ ಬೆಳಗಾಂ ವಿಭಾಗದ ೯ ಜಿಲ್ಲೆಗಳು ಭಾಗವಹಿಸುತ್ತವೆ ಎಂದು ಪ್ರಭಾರ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳಾದ ಎಸ್ ಬಿ ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.