1,872 total views
ಶಹಾಪುರ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅತ್ಯಂತ ಬಹುಮತದಿಂದ ಚುನಾಯಿತರಾದ ಶಾಸಕ ಶರಣಬಸಪ್ಪಗೌಡ ದರ್ಶನಾಪುರ್ ಅವರಿಗೆ ಪ್ರಸ್ತುತ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಬೇಕೆಂದು ಆರ್ಯ ಈಡಿಗ ಸಮಾಜದ ತಾಲೂಕ ಅಧ್ಯಕ್ಷರಾದ ಮಲ್ಲಯ್ಯ ಗುತ್ತೇದಾರ್ ರವರು ಮನವಿ ಮಾಡಿದ್ದಾರೆ ದರ್ಶನಾಪುರ ರವರು ಅಭಿವೃದ್ಧಿ ಕಾರ್ಯಗಳಿಗೆ ಮುಂಚೂಣಿಯಲ್ಲಿದ್ದು, ವಿಶೇಷವಾಗಿ ಯಾದಗಿರಿ ಜಿಲ್ಲೆಯ ಮುತ್ಸದ್ದಿ ನಾಯಕರಾಗಿದ್ದು, ರಾಜ್ಯಕ್ಕೆ ಅವರ ಸೇವೆ ಅಗತ್ಯವಾಗಿದ್ದು ,ಸಂಪುಟದಲ್ಲಿ ಅವರಿಗೆ ಉತ್ತಮ ಸ್ಥಾನಮಾನ ನೀಡಿ ,ಗೌರವ ನೀಡಬೇಕೆಂದು ಆರ್ಯ ಈಡಿಗ ಸಮಾಜದ ತಾಲೂಕ ಅಧ್ಯಕ್ಷರಾದ ಮಲ್ಲಯ್ಯ ಗುತ್ತೇದಾರ್ ಅವರು ಆಗ್ರಹಿಸಿದ್ದಾರೆ .ವರದಿ ಶರಣಪ್ಪ ಯಾದಗಿರಿ